Friday, May 10, 2024

ಡಿಕೆಶಿಯನ್ನು ಮಾರಿ ಕೋಣಕ್ಕೆ ಹೋಲಿಸಿದ ರೇಣುಕಾಚಾರ್ಯ..!

ಹುಬ್ಬಳ್ಳಿ : ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಶಾಸಕ ರೇಣುಕಾಚಾರ್ಯ ಅವರು ಮಾರಿ ಕೋಣಕ್ಕೆ ಹೋಲಿಸಿದ್ದಾರೆ.
ಕುಂದಗೀಳದಲ್ಲಿ ಪ್ರಚಾರದ ವೇಳೆ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ”ಮಾರಿ ಹಬ್ಬಕ್ಕೆ ಬಲಿ ಕೊಡುವ ಮುಂಚೆ ಕೋಣಕ್ಕೆ ಎಣ್ಣೆ ಹಚ್ಚಿ ತಿಕ್ತಾರೆ. ಅದೇ ರೀತಿ ಕಾಂಗ್ರೆಸ್​ ಡಿಕೆಶಿ ಅವರನ್ನ ಸರಿಯಾಗಿ ಬಳಸಿಕೊಳ್ತಿದೆ. ಮಾರಿ ಕೋಣವನ್ನುಕಡಿಯಬೇಕೆಂದು ಇಲ್ಲಿಗೆ ಕಾಂಗ್ರೆಸ್​ನವರು ಕರೆತಂದಿದ್ದಾರೆ” ಎಂದು ವಾಕ್​ಪ್ರಹಾರ ನಡೆಸಿದರು.
ರೇಣುಕಾಚಾರ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ”ಕುಂದಗೋಳ ಕ್ಷೇತ್ರಕ್ಕೆ ಒಳ್ಳೆಯದಾಗೋದಾದ್ರೆ ನನ್ನ ಬಲಿ ಕೊಡ್ಲಿ. ಕೋಣ ಬಲಿಕೊಡೋದು ಊರಿಗೆ ಒಳ್ಳೆಯದಾಗಲಿ ಅಂತ. ನಗುವುದು ಸಹಜ ಧರ್ಮ,ನಗಿಸುವದು ಪರಧರ್ಮ” ಎಂದು ತಿರುಗೇಟು ನೀಡಿದ್ರು.

RELATED ARTICLES

Related Articles

TRENDING ARTICLES