Saturday, May 11, 2024

ಕೊನೆಯ ಮ್ಯಾಚ್​ಗೂ ಮುನ್ನ ಕೊಹ್ಲಿ, ಎಬಿಡಿ ಮನದಾಳದ ಮಾತು..!

ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್​ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು 12ನೇ ಆವೃತ್ತಿಯಲ್ಲೂ ನಿರಾಸ ಪ್ರದರ್ಶನವನ್ನು ನೀಡಿದೆ. ಇದರೊಂದಿಗೆ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದು, ಇಂದು ಕೊನೆಯ ಲೀಗ್​ ಮ್ಯಾಚ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಅನ್ನು ಎದುರಿಸಲು ರೆಡಿಯಾಗಿದೆ.
ಕೊನೆಯ ಮ್ಯಾಚ್​ಗೂ ಮುನ್ನ ಕ್ಯಾಪ್ಟನ್ ಕೊಹ್ಲಿ ಮತ್ತು ಸ್ಟಾರ್​ ಬ್ಯಾಟ್ಸ್​ಮನ್ ಎ ಬಿ ಡಿವಿಲಿಯರ್ಸ್​ ವಿಡಿಯೋ ಮೂಲಕ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಸೋಲು-ಗೆಲುವಿನ ನಡುವೆಯೂ ಆರ್​ಸಿಬಿಯನ್ನು ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ಕಳೆದ ಮ್ಯಾಚ್​ ವೇಳೆ ಮಳೆಯನ್ನೂ ಲೆಕ್ಕಿಸದೇ ರಾತ್ರಿ 12 ಗಂಟೆ ಕಳೆದ್ರೂ ತಂಡವನ್ನು ಬೆಂಬಲಿಸಿದ್ದಕ್ಕೆ ನಾವು ಚಿರರುಣಿಗಳು ಅಂತ ಹೇಳಿದ್ದಾರೆ.
ಈ ಆವೃತ್ತಿಯ ಐಪಿಎಲ್​ ನಿರಾಸೆ ತಂದಿದೆ. ಕೈಲಾದ ಪ್ರಯತ್ನ ಮಾಡಿದ್ರೂ ರಿಸೆಲ್ಟ್ ಬೇರೇನೇ ಇತ್ತು. ಮುಂದಿನ ಸಲ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡ್ತೀವಿ ಅಂದಿದ್ದಾರೆ.

 

RELATED ARTICLES

Related Articles

TRENDING ARTICLES