ನಿಖಿಲ್ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ ‘ಲೋಕ’ ಅಖಾಡಕ್ಕೆ ಇಳಿಯುತ್ತಿದ್ದಂತೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು ‘ ನಿಖಿಲ್ ಎಲ್ಲಿದ್ದಿಯಪ್ಪಾ’ ಅನ್ನೋ ಡೈಲಾಗ್. ನಿಖಿಲ್ ಅವರ ಚೊಚ್ಚಲ ಸಿನಿಮಾ ‘ಜಾಗ್ವಾರ್’ ಆಡಿಯೋ ಲಾಂಚ್ ಟೈಮ್ನಲ್ಲಿ ಸಿಎಂ ಕುಮಾರಸ್ವಾಮಿ ಅವರು, ‘ನಿಖಿಲ್ ಎಲ್ಲಿದ್ದಿಯಪ್ಪಾ’ ಅಂತ ಕರೆದಿದ್ದು ಎಲೆಕ್ಷನ್ ಟೈಮ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಎಲೆಕ್ಷನ್ ಮುಗಿದರೂ ಇದು ಅದೇ ಟ್ರೆಂಡ್ನಲ್ಲಿದೆ.
ರಾಜ್ಯದಲ್ಲಿ ಲೋಕ ಸಭಾ ಚುನಾವಣೆ ಕಾವು ಮುಗಿದಿದ್ರು ನಿಖಿಲ್ ಎಲ್ಲಿದ್ದಿಯಪ್ಪಾ ಎನ್ನುವ ಮಾತು ಮಾತ್ರ ಜನ ಮರೆತಿಲ್ಲ. ಕುಂದಾಪುರ ಕೋಣೆಯಲ್ಲಿ ನಡೆದ ಶ್ರೀ ಕ್ಷೇತ್ರ ಕಮಲಶಿಲೆ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ಕೌರವ ಎಲ್ಲಿದ್ದಿಯಪ್ಪಾ ಮಾತು ಕೇಳಿ ಬಂದಿದೆ. ಈ ಮೂಲಕ ಗಂಭೀರ ಪ್ರಸಂಗದಲ್ಲೂ ಹಾಸ್ಯದ ಹೊನಲು ಹರಿದಿದೆ.
ತೆಂಕು ಮತ್ತು ಬಡಗು ತಿಟ್ಟಿನ ಕೂಡಾಟದಲ್ಲಿ ಮೂಡಿ ಬಂದ ಯಕ್ಷಗಾನದಲ್ಲಿ ಭೀಮನ ಪಾತ್ರಧಾರಿ ಶಶಿಕಿರಣ್ ಕಾವು ಕೌರವನನ್ನು ಕರೆಯು ಸಂದರ್ಭ ಬಳಸಿಕೊಂಡ ಈ ಮಾತು ಸದ್ಯ ವೈರಲ್ ಆಗಿದೆ.ಸದ್ಯ ಚುನಾವಣೆ ಮುಗಿದರು ನಿಖಿಲ್ ಎಲ್ಲಿದ್ದೀಯಪ್ಪ ಎನ್ನುವ ಡೈಲಾಗ್ ಮಾತ್ರ ತರಹೇವಾರಿ ಟ್ರೋಲ್ ಆಗುತ್ತಲೇ ಇದೆ.
ಯಕ್ಷಗಾನದಲ್ಲೂ ನಿಖಿಲ್ ಎಲ್ಲಿದ್ದಿಯಪ್ಪಾ..!
TRENDING ARTICLES