Friday, April 19, 2024

ಚುನಾವಣಾ ರಾಯಭಾರಿ ದ್ರಾವಿಡ್​ಗೆ ಈ ಬಾರಿ ಮತದಾನಕ್ಕೆ ಅವಕಾಶವಿಲ್ಲ..!

ಬೆಂಗಳೂರು:  ಟೀ ಇಂಡಿಯಾ ಮಾಜಿ ಕ್ಯಾಪ್ಟನ್​, ಹಾಲಿ ಕಿರಿಯರ ತಂಡದ ಗುರು ರಾಹುಲ್​ ದ್ರಾವಿಡ್​ ಅವರು ಕರ್ನಾಟಕದಲ್ಲಿ ಚುನಾವಣಾ ರಾಯಭಾರಿ ಅನ್ನೋದು ಗೊತ್ತೇ ಇದೆ. ಆದರೆ ಈ ಬಾರಿ ಅವರು ಮತ ಚಲಾಯಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಯಾಕೆ ಗೊತ್ತಾ..? ಮತದಾರರ ಪಟ್ಟಿಯಲ್ಲಿ ದ್ರಾವಿಡ್ ಹೆಸರೇ ಇಲ್ಲ. ಕರ್ನಾಟಕ ಚುನಾವಣೆಯ ರಾಯಭಾರಿ ದ್ರಾವಿಡ್​ ಎಪ್ರಿಲ್ 18ರಂದು ಮತ ಚಲಾಯಿಸುತ್ತಿಲ್ಲ. ಮನೆ ಬದಲಾಯಿಸುವ ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ದ್ರಾವಿಡ್​ ಹೆಸರು ತೆಗೆದು ಹಾಕಲಾಗಿದೆ. ಆದರೆ ಇಲ್ಲಿಯವರೆಗೂ ಪುನಃ ಹೆಸರನ್ನು ಸೇರಿಸದಿರುವುದಿಂದ ಅವರು ಮತ ಚಲಾಯಿಸುವ ಅವಕಾಶ ಕಳೆದುಕೊಂಡಿದ್ದಾರೆ.

ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಇಂದಿರಾನಗರದಲ್ಲಿ ದ್ರಾವಿಡ್ ವಾಸವಿದ್ದರು. ಆರ್​ಎಂವಿ ಎಕ್ಸ್ಟೆನ್ಷನ್ ಅಶ್ವತ್ಥ ನಗರಕ್ಕೆ ಮನೆ ಬದಲಿಸಿದ್ದ ದ್ರಾವಿಡ್ ಅವರು ಇಂದಿರಾನಗರದಲ್ಲಿ ಮತದ ಹಕ್ಕು‌ರದ್ದತಿಗೆ ಅರ್ಜಿ ಸಲ್ಲಿಸಿದ್ರು. ಮತ್ತಿಕೆರೆ ಸಬ್ ಡಿವಿಷನ್​​​ನಲ್ಲಿ ಮತಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದ್ದರೂ ನಿಗದಿತ ಸಮಯದಲ್ಲಿ ಸಲ್ಲಿಸದಿರುವುದರಿಂದ ಮತ ಚಲಾಯಿಸುವ ಅವಕಾಶ ಕಳೆದುಕೊಂಡಿದ್ದಾರೆ.

ರಾಹುಲ್​ ದ್ರಾವಿಡ್​ ಅವರು ಪ್ರತಿ ಬಾರಿಯೂ ತಪ್ಪದೆ ಮತ ಚಲಾಯಿಸುತ್ತಿದ್ದರು. ಹಾಗಾಗಿ ಅವರನ್ನು ಮತ ಚಲಾಯಿಸುವ ಬಗ್ಗೆ ಜಾಗೃತಿ ಮೂಡಿಸುವ ರಾಯಭಾರಿಯಾಗಿ ಆಯ್ಕೆ ಮಾಡಿದೆವು. ಇನ್ನು ಪಕ್ಷಗಳ ವಿಚಾರದಲ್ಲಿಯೂ ಅವರು ತಟಸ್ಥ ನಿಲುವುಗಳಳ್ಳ ವ್ಯಕ್ತಿಯಾಗಿದ್ದು, ಒಬ್ಬ ಸೆಲೆಬ್ರಿಟಿಯೂ ಹೌದು. ಈ ಬಾರಿ ಅವರು ಮತ ಚಲಾಯಿಸಲು ಸಾಧ್ಯವಿಲ್ಲ ಎಂಬುದನ್ನು ತಿಳಿದು ಅಚ್ಚರಿಯಾಯಿತು ಅಂತ ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

RELATED ARTICLES

Related Articles

TRENDING ARTICLES