Saturday, April 20, 2024

ತೇಜಸ್ವಿ ಸೂರ್ಯ ವಿರುದ್ಧ ರಾಜ್ಯ ಮಹಿಳಾ ಆಯೋಗ ಆಕ್ರೋಶ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ವಿರುದ್ಧ ರಾಜ್ಯ ಮಹಿಳಾ ಆಯೋಗ ಆಕ್ರೋಶ ವ್ಯಕ್ತಪಡಿಸಿದೆ. ಯುವತಿ, ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪದಲ್ಲಿ ಮಹಿಳಾ ಆಯೋಗ ನೋಟಿಸ್​ ನೀಡಿತ್ತು. ಇದಕ್ಕೆ ಕ್ಯಾರೇ ಅನ್ನದ ತೇಜಸ್ವಿ ಸೂರ್ಯ ಬಗ್ಗೆ ಮಹಿಳಾ ಆಯೋಗ ಗರಂ ಆಗಿದ್ದು, ತೇಜಸ್ವಿ ಪರ ಹಾಜರಾದ ವಕೀಲರಿಗೆ ಮಹಿಳಾ ಆಯೋಗ ಛೀಮಾರಿ ಹಾಕಿದೆ. ತೇಜಸ್ವಿ ಅವರಿಗೆ ಸೋಮವಾರ ನಾಲ್ಕು ಗಂಟೆಗೆ ಹಾಜರಾಗುವುವಂತೆ ಸೂಚನೆ ನೀಡಲಾಗಿತ್ತು. ಸೋಮವಾರ ಡೆಡ್​ಲೈನ್ ನೀಡಿದ್ರೂ ತೇಜಸ್ವಿ ಸೂರ್ಯ ಅವರು ಹಾಜರಾಗಿಲ್ಲ.  “ಅವರೇನು ವಿದೇಶದಲ್ಲಿ ಇಲ್ಲ, ಇಲ್ಲೇ ಇದ್ದುಕೊಂಡು ಯಾಕೆ ಬರ್ತಿಲ್ಲ..? ಸಂಜೆಯೊಳಗೆ ಹಾಜರಾಗಲೇಬೇಕು ಎಂದು ತೇಜಸ್ವಿಗೆ ಮಹಿಳಾ ಆಯೋಗ ಎಚ್ಚರಿಕೆ ನೀಡಿದೆ.

RELATED ARTICLES

Related Articles

TRENDING ARTICLES