Friday, March 29, 2024

ಐಟಿ ದಾಳಿ: ಸಿಎಂ ಆಪ್ತರ ಮನೆಯಲ್ಲಿ ಸಿಕ್ತು 9 ಕೋಟಿ ರೂಪಾಯಿ..!

ನವದೆಹಲಿ: ಮಧ್ಯಪ್ರದೇಶ ಸಿಎಂ ಕಮಲ್ ನಾಥ್​ ಅವರ ಮಾಜಿ ಆಪ್ತ ಕಾರ್ಯದರ್ಶಿ ಪ್ರವೀಣ್ ಕಕ್ಕರ್ ಹಾಗೂ ಮಾಜಿ ಸಲಹೆಗಾರ​ ರಾಜೇಂದ್ರ ಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ದೆಹಲಿ ಹಾಗೂ ಮಧ್ಯಪ್ರದೇಶದಲ್ಲಿ ಇಬ್ಬರು ಅಧಿಕಾರಿಗಳ ಮನೆ ಸೇರಿ ಒಟ್ಟು 9 ಕೋಟಿ ರೂಪಾಯಿಗೂ ಹೆಚ್ಚು ನಗದು ದೊರೆತಿದೆ ಎಂದು ತಿಳಿದುಬಂದಿದೆ.

ಹವಾಲಾ ಕೇಸ್​ಗೆ ಸಂಬಂಧಿಸಿದಂತೆ ಇಂದೋರ್​ನಲ್ಲಿರುವ ಪ್ರವೀಣ್ ಹಾಗೂ ದೆಹಲಿಯ ಮಿಗ್ಲಾನಿಯಲ್ಲಿರುವ ರಾಜೇಂದ್ರ ಅವರ ಮನೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೆಹಲಿಯ 15 ಜನ ಐಟಿ ಅಧಿಕಾರಿಗಳ ತಂಡ ಪ್ರವೀಣ್​ ಕಕ್ಕರ್​ ಅವರ ಇಂಡದೋರ್​ನ ವಿಜಯನಗರದಲ್ಲಿರುವ ಮನೆ ಮೇಲೆ ಬೆಳಗ್ಗೆ 3 ಗಂಟೆಗೆ ದಾಳಿ ನಡೆಸಿದ್ದಾರೆ. ಚುನಾವಣಾ ಸಂದರ್ಭ ಹವಾಲಾ ಮೂಲಕ ದೊಡ್ಡ ಮೊತ್ತದ ಟ್ರಾನ್ಸಾಕ್ಷನ್​ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

RELATED ARTICLES

Related Articles

TRENDING ARTICLES