Sunday, September 24, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeಸಿನಿಮಾಕೆಜಿಎಫ್ ನಂತ್ರ ರಾಕಿ ಭಾಯ್ ಆಗ್ತಾರಾ 'ಕಿರಾತಕ'?

ಕೆಜಿಎಫ್ ನಂತ್ರ ರಾಕಿ ಭಾಯ್ ಆಗ್ತಾರಾ ‘ಕಿರಾತಕ’?

ಇವತ್ತು ಯಶ್ ಆಲ್ ಇಂಡಿಯಾ ಸ್ಟಾರ್ . ಕೆಜಿಎಫ್ ಅನ್ನೋ ಒಂದು ಸಿನಿಮಾ ರಾಕಿಂಗ್​ ಸ್ಟಾರ್​ ಯಶ್ ಅವ್ರಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿದೆ . ಯಶ್ ಅವ್ರ ಕಾಲ್ ಶೀಟ್​ಗಾಗಿ ಅದೆಷ್ಟೋ ನಿರ್ಮಾಪಕರು, ನಿರ್ದೇಶಕರು ಮನೆ ಮುಂದೆ ಕ್ಯೂ ನಿಂತಿದ್ದಾರೆ . ಅಷ್ಟೇ ಅಲ್ಲದೆ ವಿಶ್ವ ಚಿತ್ರರಂಗ ಇವತ್ತು ಸ್ಯಾಂಡಲ್​ವುಡ್​ನತ್ತ ಚಿತ್ತ ನೆಟ್ಟಿರೋದಕ್ಕೆ ಕಾರಣ ಕೆಜಿಎಫ್ ಸಿನಿಮಾ ಅಂದ್ರೆ ತಪ್ಪಗೋದಿಲ್ಲ.
ಯಶ್ ಅವರ ಇವತ್ತಿನ ಈ ಮಟ್ಟದ ಸಕ್ಸಸ್ ಗೆ ಆ ಒಂದು ಚಿತ್ರ ಕಾರಣ .

ಯೆಸ್ .. ಆ ಚಿತ್ರವೇ ಕಿರಾತಕ .. ಕಿರಾತಕ ಚಿತ್ರ ಬರೋದಕ್ಕೆ ಮುನ್ನ ಯಶ್ ಅವ್ರ ಯಾವ ಸಿನಿಮಾ ಕೂಡಾ ಹೇಳಿಕೊಳ್ಳೋ ಮಟ್ಟಿಗೆ ಹಿಟ್ ಆಗಿರಲಿಲ್ಲ . ಮೊಗ್ಗಿನ ಮನಸ್ಸು ಹಿಟ್ ಆದರೂ ಆ ಸಕ್ಸಸ್ ಯಶ್ ಅವ್ರಿಗೆ ಸಲ್ಲಿರಲಿಲ್ಲ. ಯಾವಾಗ ಕಿರಾತಕ ಸಿನಿಮಾ ಹಿಟ್ ಆಯಿತೋ ಯಶ್ ಅವ್ರಿಗೆ ಒಂದು ಬ್ರಾಂಡ್ ತಂದು ಕೊಟ್ಟಿದ್ದು ಸುಳಲ್ಲ.
ಕಿರಾತಕ ಚಿತ್ರದ ಮಂಡ್ಯ ನೇಟಿವಿಟಿ ಜನರಿಗೆ ಇಷ್ಟವಾಗಿದ್ದು . ಯಶ್ ಅವರ ಸಹಜ ನಟನೆಗೆ ಜನರು ಫಿದಾ ಆಗಿದ್ದರು . ಈ ಚಿತ್ರದ ನಂತ್ರ ಯಶ್ ಅವ್ರು ಸಾಲು ಸಾಲು ಹಿಟ್ ಕೊಟ್ಟರು . ಒಂದು ರೀತಿಯಲ್ಲಿ ಕೆಜಿಎಫ್ ಸಕ್ಸಸ್ ಗೆ ಯಶ್ ಅವ್ರಿಗೆ ಭದ್ರ ಬುನಾದಿ ಹಾಕಿ ಕೊಟ್ಟಿದ್ದು ಇದೆ ಕಿರಾತಕ . ಕಿರಾತಕ ಚಿತ್ರದ ನಂತ್ರ ಯಶ್ ಜಾತಕವೇ ಬದಲಾಗಿದ್ದು ಮಾತ್ರ ನಿಜ.
ಈಗ ಕಿರಾತಕ ಚಿತ್ರದ ಸೀಕ್ವೆಲ್ ಬಗ್ಗೆ ಹಲವಾರು ಸುದ್ದಿ ಗಳು ಕೇಳಿಬಂದಿದ್ವು . ಹತ್ತು ದಿನಗಳ ಕಾಲ ಚಿತ್ರೀಕರಣ ಪೂರ್ಣ ಮಾಡಿದ್ದ ಕಿರಾತಕ ಸಿನಿಮಾ ಸಧ್ಯಕ್ಕೆ ನಿಂತು ಹೋಗಿದೆ . ಇದರ ಬೆನ್ನಲ್ಲೇ ನಿರ್ದೇಶಕ ಅನಿಲ್ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದು . ಯಶ್ ಮತ್ತೆ ರಾಕಿ ಭಾಯ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಎಲ್ಲವೂ ಹಳೆ ವಿಷಯ. ಇದೆಲ್ಲಾ ಗಮನಿಸಿದ ಕೆಲವ್ರು ರಾಕೀ ಭಾಯ್ ‘ಕಿರಾತಕ’ನ ಕತ್ತು ಹಿಸುಕಿದ್ರು ಅಂತ ಮಾತನಾಡಿಕೊಂಡರು..!
ಸಧ್ಯ ಹೊಸ ವಿಷಯ ಏನು ಅಂದ್ರೆ ಕಿರಾತಕ ಸೀಕ್ವೆಲ್ ಬರೋದು ಕನ್ಫರ್ಮ್ . ಕೆಜಿಎಫ್ ಆದ್ಮೇಲೆ ಯಶ್ ನಟಿಸೋದು ಪಕ್ಕಾ ಆಗಿದೆ . ಯಾಕಂದ್ರೆ ಯಶ್ ಅವ್ರು ಈ ಮಟ್ಟದ ಗೆಲುವಿಗೆ ಸಹಾಯ ಮಾಡಿದ್ದು ನಿರ್ಮಾಪಕ ಜಯಣ್ಣ , ಜಯಣ್ಣ ಅವರ ಬ್ಯಾನರ್ ನಲ್ಲಿ ಕಿರಾತಕ ಸೀಕ್ವೆಲ್ ಬರುತ್ತಿದೆ ಹಾಗಾಗಿ ಯಶ್ ಈ ಸಿನಿಮಾದಿಂದ ಹಿಂದೆ ಸರಿಯೋ ಮಾತೆ ಇಲ್ಲ ಅನ್ನುತ್ತಿದೆ ಯಶ್ ಅವ್ರ ಆಪ್ತ ಮೂಲಗಳು
ಕೆಜಿಎಫ್ ಚಿತ್ರದ ಮುಗಿದ ಮೇಲೆ ರಾಕೀಭಾಯ್ ಕಿರಾತಕನ ಅವತಾರ ಎತ್ತಲಿದ್ದಾರೆ . ಈ ಹಿಂದೆ ಯಶ್ ಕೂಡಾ ಇದನ್ನ ಸ್ಪಷ್ಟ ಪಡಿಸಿದ್ದರು .ಕೆಜಿಎಫ್ ಯಶಸ್ಸು ತಲೆಗೆ ಹತ್ತಿಲ್ಲ ಅನ್ನೋ ಮಾತುಗಳಿಂದ ಕಿರಾತಕನ ಬಗ್ಗೆ ಯಶ್ ಗುಟ್ಟು ಬಿಟ್ಟುಕೊಟ್ಟಿದ್ದರು.
ಒಟ್ಟಿನಲ್ಲಿ ಯಶ್ ಅವ್ರಿಗೆ ಬ್ರ್ಯಾಂಡ್ ವ್ಯಾಲ್ಯೂ ತಂದು ಕೊಟ್ಟಿದ್ದ ಗೂಳಿ ನಂದೀಶನ ಪಾತ್ರದಲ್ಲಿ ಯಶ್ ಮತ್ತೆ ಬರಲಿದ್ದಾರೆ . ರಾಕೀ ಭಾಯ್ ಅವ್ರ ಕಿರಾತಕನ ಅವತಾರ ನೋಡಲು ಇನ್ನು ಒಂದೂವರೆ ವರ್ಷ ಕಾಯಲೇ ಬೇಕು . ಈ ಸಮಯದಲ್ಲಿ ಮತ್ತೆ ಏನಾದ್ರು ನೆಗೆಟಿವ್ ಬದಲಾವಣೆಗಳಾದ್ರು ಅಚ್ಚರಿ ಪಡೆಬೇಕಾಗಿಲ್ಲ . ಆದ್ರೆ ಅಭಿಮಾನಿಗಳು ಕಿರಾತಕನ ಅವತಾರದಲ್ಲಿ ಯಶ್ ಅವರನ್ನ ನೋಡೋಕೆ ಕಾಯ್ತಾ ಇರೋದು ಮಾತ್ರ ಸತ್ಯ.

-ಮನೋಜ್ ನರಗುಂದಕರ್

9 COMMENTS

LEAVE A REPLY

Please enter your comment!
Please enter your name here

Most Popular

Recent Comments