Thursday, April 25, 2024

ಬಿಜೆಪಿಯನ್ನು ಪ್ರಶ್ನಿಸಿದ್ರೆ ದೇಶದ್ರೋಹಿಗಳು: ವಿಶ್ವನಾಥ್

ಬೆಂಗಳೂರು: ಬಿಜೆಪಿಯನ್ನು ಹೊಗಳಿದ್ರೆ ಮಾತ್ರ ರಾಷ್ಟ್ರೀಯವಾದಿಗಳು, ಬಿಜೆಪಿಯನ್ನು ಪ್ರಶ್ನೆ ಮಾಡಿದ್ರೆ ದೇಶದ್ರೋಹಿಗಳು ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹೇಳಿದ್ದಾರೆ. ಪ್ರೆಸ್​ಕ್ಲಬ್​ನಲ್ಲಿ ಮಾಧ್ಯಮ ಸಂವಾದ ನಡೆಸಿದ ಹೆಚ್.ವಿಶ್ವನಾಥ್ ಅವರು, “2014ರಲ್ಲಿ ಮೋದಿ ಕೊಟ್ಟ ಭರವಸೆಗಳು ಈಡೇರಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದ್ರು. ಆದರೆ ಯಾವುದೇ ಉದ್ಯೋಗವೂ ಸೃಷ್ಟಿ ಆಗಿಲ್ಲ. ದೇಶವನ್ನು ಕಟ್ಟುವುದಿರಲಿ, ಹಾಳು ಮಾಡುತ್ತಾ ಇದ್ದಾರೆ” ಅಂತ ಹೇಳಿದ್ದಾರೆ.

RELATED ARTICLES

Related Articles

TRENDING ARTICLES