Wednesday, September 27, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜಕೀಯಧಾರವಾಡದಲ್ಲಿ ವಿನಯ್​ ಕುಲಕರ್ಣಿಗೆ ಕಾಂಗ್ರೆಸ್​ ಟಿಕೆಟ್​ - ಇಂದು ನಾಮಪತ್ರ ಸಲ್ಲಿಕೆ

ಧಾರವಾಡದಲ್ಲಿ ವಿನಯ್​ ಕುಲಕರ್ಣಿಗೆ ಕಾಂಗ್ರೆಸ್​ ಟಿಕೆಟ್​ – ಇಂದು ನಾಮಪತ್ರ ಸಲ್ಲಿಕೆ

ಧಾರವಾಡ: ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಲ್ಲಿ ಮೂಡಿದ ಟಿಕೆಟ್ ಬಿಕ್ಕಟ್ಟಿಗೆ ಕೊನೆಗೂ ತೆರೆಬಿದ್ದಿದೆ. ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಟಿಕೆಟ್​ ನೀಡಲು ನಿರ್ಧರಿಸಿದ್ದು, ತಡರಾತ್ರಿ ಅಭ್ಯರ್ಥಿ ಹೆಸರು ಅಂತಿಮಗೊಳಿಸಿದೆ. ಟಿಕೆಟ್ ಘೋಷಣೆ ಬೆನ್ನಲ್ಲೆ ವಿನಯ್ ಕುಲಕರ್ಣಿಗೆ ಬಿ ಫಾರ್ಮ್​ ರವಾನೆ ಮಾಡಲಾಗಿದೆ. ಶಾಕೀರ್ ಸನದಿಗೆ ಟಿಕೆಟ್ ಕಾಂಗ್ರೆಸ್​ ಟಿಕೆಟ್ ಕೈ ತಪ್ಪಿದೆ. ವಿನಯ್​ ಕುಲಕರ್ಣಿ ಹಾಗೂ ಶಾಕೀರ್​ ಸನದಿ ಇಬ್ಬರೂ ಧಾರವಾಡ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಇದೀಗ ವಿನಯ್​ ಕುಲಕರ್ಣಿಗೆ ಟಿಕೆಟ್​ ನೀಡೋ ಮೂಲಕ ಧಾರವಾಡದಲ್ಲಿ ಟಿಕೆಟ್​ ಗೊಂದಲಕ್ಕೆ ಕಾಂಗ್ರೆಸ್​ ತೆರೆ ಎಳೆದಿದೆ.

ನಿನ್ನೆಯವರೆಗೂ ಟಿಕೆಟ್​ ಖಚಿತವಾಗದಿದ್ದಕ್ಕೆ ಅಸಮಾಧಾನಗೊಂಡಿದ್ದ ಮಾಚಿ ಸಚಿವ ವಿನಯ್​ ಕುಲಕರ್ಣಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಮುಂದಾಗಿದ್ದರು. ಇಂದು ಕಾಂಗ್ರೆಸ್​ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. “ಧಾರವಾಡದ ಟಿಕೆಟ್ ಗೊಂದಲ ನಿವಾರಣೆಯಾಗುತ್ತೆ. ಸಂಜೆ ವೇಳೆಗೆ ಅಭ್ಯರ್ಥಿ ಆಯ್ಕೆಯನ್ನು ಹೈಕಮಾಂಡ್ ಅಂತಿಮಗೊಳಿಸಲಿದೆ” ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ಹುಬ್ಬಳ್ಳಿಯಲ್ಲಿ ಸಭೆ ನಡೆಸಿದ ನಂತರ ಹೇಳಿಕೆ ನೀಡಿದ್ದರು.

LEAVE A REPLY

Please enter your comment!
Please enter your name here

Most Popular

Recent Comments