Friday, April 19, 2024

ವ್ಯಕ್ತಿತ್ವವೂಇಲ್ಲ, ಸಿದ್ಧಾಂತವೂ ಇಲ್ಲ: ಮಂಜು ವಿರುದ್ಧ ಪ್ರಜ್ವಲ್​ ವಾಗ್ದಾಳಿ

ಹಾಸನ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಚಾರ ಕಾರ್ಯವೂ ಜೋರಾಗಿದೆ. ಹಾಗೇ ರಾಜಕೀಯ ಮುಖಂಡರು ಪರಸ್ಪರ ವಾಗ್ದಾಳಿ ನಡೆಸುವುದೂ ಸಮಾನ್ಯಾಗಿದೆ. ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್​ ರೇವಣ್ಣ ಅವರು ಹಾಸನ ಬಿಜೆಪಿ ಅಭ್ಯರ್ಥಿ ಎ. ಮಂಜು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎ. ಮಂಜು ಬಗ್ಗೆ ಮಾತನಾಡಿರುವ ಪ್ರಜ್ವಲ್ ರೇವಣ್ಣ ಅವರು “ಮುಸ್ಲಿಂ ವಿರೋಧಿ ಎಂದು ಅವರೇ ತೋರಿಸಿಕೊಂಡಿದ್ದಾರೆ. ಯಾವ ಮುಖ ಇಟ್ಟುಕೊಂಡು ಮುಸ್ಲಿಂರ ಬಳಿ ವೋಟ್​​ ಕೇಳ್ತಾರೆ. ಇವರಿಗೆ ವ್ಯಕ್ತಿತ್ವವೂಇಲ್ಲ, ಸಿದ್ಧಾಂತವೂ ಇಲ್ಲ” ಅಂತ ಹೇಳಿದ್ದಾರೆ.

RELATED ARTICLES

Related Articles

TRENDING ARTICLES