Friday, April 26, 2024

ಡಿಸಿ ಮಂಜುಶ್ರೀ ಎಡವಟ್ಟು – ಎಂ.ಸುಮಲತಾ, ಎ.ಸುಮಲತಾ ಅಂತ 2 ಹೆಸರು ಉಲ್ಲೇಖ..!

ಮಂಡ್ಯ: ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸುಮಲತಾ ಅಂಬರೀಶ್ ಅವರ ಹೆಸರು ಉಲ್ಲೇಖ ಮಾಡುವಾಗ ಜಿಲ್ಲಾಧಿಕಾರಿ ಮಂಜುಶ್ರೀ ಅವರು ಎಡವಟ್ಟು ಮಾಡಿದ್ದಾರೆ. ನಿನ್ನೆ ಸುಮಲತಾ ಅವರಿಗೆ ಮಂಜುಶ್ರೀ ಅವರು ನೋಟಿಸ್ ನೀಡಿದ್ದು, ಈ ನೋಟಿಸ್​ನಲ್ಲಿ ಎಂ. ಸುಮಲತಾ ಹಾಗೂ ಎ. ಸುಮಲತಾ ಅನ್ನೋ ಎರಡು ಹೆಸರು ನಮೂದಿಸಲಾಗಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಹೆಸರಿನಲ್ಲಿ ಜಿಲ್ಲಾಧಿಕಾರಿಗೆ ಗೊಂದಲ ಉಂಟಾಗಿದ್ದು, ನೋಟಿಸ್​ನಲ್ಲಿಯೂ ಎರಡು ಕಡೆ ಭಿನ್ನಾವಗಿ ಸುಮಲತಾ ಹೆಸರು ಬರೆಯಲಾಗಿದೆ. ನಿನ್ನೆ ನೀಡಿದ ನೋಟಿಸ್​ನಲ್ಲಿ ಜಿಲ್ಲಾಧಿಕಾರಿ ಮಂಜುಶ್ರೀ ಅವರು ಈ ಎಡವಟ್ಟು ಮಾಡಿದ್ದಾರೆ.

RELATED ARTICLES

Related Articles

TRENDING ARTICLES