Thursday, April 25, 2024

ಸಿಎಂ ಕುಮಾರಸ್ವಾಮಿಗೆ ಮುತ್ತು ಕೊಟ್ಟ ಅಭಿಮಾನಿ..!

ಮಂಡ್ಯ : ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರಿಗೆ ಅಭಿಮಾನಿಯೊಬ್ಬ ಮುತ್ತು ಕೊಟ್ಟಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ನಿಖಿಲ್​ ಕುಮಾರಸ್ವಾಮಿ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಬೃಹತ್ ರೋಡ್​ ಶೋ ಬಳಿಕ ಸಿಎಂ ತಮ್ಮ ಕಾರು ಏರಲು ಹೋದಾಗ, ಅವರನ್ನು ಹಿಂಬಾಲಿಸಿ ಬಂದ ಅಭಿಮಾನಿ ಮುತ್ತು ಕೊಟ್ಟಿದ್ದಾನೆ. ಸಿಎಂ ಯಾವ್ದೇ ಪ್ರತಿಕ್ರಿಯೆ ನೀಡದೇ ತನ್ನ ಕಾರನ್ನೇರಿದ್ರು.
ಸುಮಲತಾ ಅವರ ಪ್ರಚಾರದ ವೇಳೆ ಅಭಿಮಾನಿಯೊಬ್ಬ ದರ್ಶನ್ ಮತ್ತು ಯಶ್ ಅವರ ಕೆನ್ನೆಗೆ ಮುತ್ತುಕೊಟ್ಟಿದ್ದನ್ನೂ ಇಲ್ಲಿ ಸ್ಮರಿಸಬಹುದು

RELATED ARTICLES

Related Articles

TRENDING ARTICLES