Friday, April 26, 2024

ಸಿನಿಮಾ ರೀತಿ ಡ್ರಾಮಾ ಬಹಳ ದಿನ ನಡೆಯಲ್ಲ : ದರ್ಶನ್​ ವಿರುದ್ಧ ಸಿಎಂ ಗರಂ..!

ಮಂಡ್ಯ : ಸಿನಿಮಾ ರೀತಿ ಡ್ರಾಮಾ ಬಹಳ ದಿನ ನಡೆಯಲ್ಲ ಅಂತ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದರ್ಶನ್ ಅವರ ಮನೆ ಮೇಲೆ ನಡೆದ ಕಲ್ಲುತೂರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾತ್ರಿ 3 ಗಂಟೆಗೆ ಯಾರಾದ್ರು ಕಲ್ಲು ತೂರ್ತಾರಾ? ಅಧಿಕಾರಿಗಳಿಗೆ ಭದ್ರತೆ ಕೊಡಿ ಅಂತ ಅಂದೆ. ಸಿಸಿಟಿವಿ ದೃಶ್ಯ ಪರಿಶೀಲಿಸಲು ಹೇಳಿದ್ದೆ. ಆದರೆ ದರ್ಶನ್​ ಅವರ ಮನೆ ಹತ್ತಿರದ ಸಿಸಿಟಿವಿ ಕ್ಯಾಮರ ಆಫ್ ಆಗಿವೆ. ಆ ಕ್ಯಾಮರಾಗಳು ಯಾಕೆ ಆಫ್ ಆದವು? ಕೆ.ಆರ್.ಪೇಟೆಯಲ್ಲಿ ಯಾರ ಕಾರಿಗೆ ಯಾರು ಕಲ್ಲು ತೂರಿದ್ದಾರೆ‌ ಎಂದು ಪ್ರಶ್ನಿಸಿದ್ರು.
ಸಿನಿಮಾ ರೀತಿ ಡ್ರಾಮಾ ಬಹಳ ದಿನ ಇರಲ್ಲ. ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ಅಂತಾರೆ. ರಾಜ್ಯದ ಜನರಿಗೆ ರಕ್ಷಣೆ ಕೊಡೋದು ನನ್ನ ಕರ್ತವ್ಯ ಎಂದು ತಿರುಗೇಟು ನೀಡಿದ್ರು.

RELATED ARTICLES

Related Articles

TRENDING ARTICLES