Wednesday, April 24, 2024

‘ಪ್ರಧಾನಿ ಮೋದಿ ಕೊಲೆಗೆ ದೋಸ್ತಿಗಳಿಂದ ಸಂಚು’ : ಬಿಜೆಪಿ ಆರೋಪ

ಬೆಂಗಳೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೊಲೆಗೆ ದೋಸ್ತಿಗಳು ಸಂಚು ಮಾಡಿದ್ದಾರೆ ಅಂತ ಬಿಜೆಪಿ ಗಂಭೀರ ಆರೋಪ ಮಾಡಿದೆ.
‘ದೋಸ್ತಿಗಳು ಸಾರ್ವಜನಿಕವಾಗಿ ಪ್ರಧಾನಿ ಕೊಲೆಗೆ ಪ್ರಚೋದಿಸುತ್ತಿದ್ದಾರೆ. ಇದಕ್ಕೆ ಎಂಎಲ್​ ಶಿವಲಿಂಗೇಗೌಡರ ಹೇಳಿಕೆಯೇ ಸಾಕ್ಷಿ. ಜೆಡಿಎಸ್​​ ಎಂಎಲ್​ಎ ಪ್ರಧಾನಿಯನ್ನು ಕಲ್ಲಲ್ಲಿ ಹೊಡೀರಿ ಅಂತಾರೆ. ಪ್ರಜಾಪ್ರಭುತ್ವದ ಅಧಃಪತನದ ಮಾತುಗಳನ್ನಾಡ್ತಿದ್ದಾರೆ. ಹೆಚ್​ಡಿಕೆ ನಾಯಕತ್ವದಲ್ಲಿ ಸರ್ವಾಧಿಕಾರ ಜೋರಾಗಿದೆ ಎಂದು ಆರೋಪಿಸಿ ಬಿಜೆಪಿ ಟ್ವೀಟ್​ ಮಾಡಿದೆ.
ಶಾಸಕ ಶಿವಲಿಂಗೇವೌಡರು ‘ಮೋದಿ ಮೋದಿ ಅಂತ ಬರೋರಿಗೆ ಕಲ್ಲಿನಿಂದ ಹೊಡೀರಿ’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಬಿಜೆಪಿ ಟ್ವೀಟ್​ ಮೂಲಕ ಕಿಡಿಕಾರಿದೆ.

RELATED ARTICLES

Related Articles

TRENDING ARTICLES