Monday, September 25, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜಕೀಯಜೋಡೆತ್ತಿನ ಗಾಡಿ ಕಟ್ಟಿದ 'ಸಾರಥಿ' ಯಶ್​ರನ್ನು ಏನಂತ ಕರೆದ್ರು ಗೊತ್ತಾ?

ಜೋಡೆತ್ತಿನ ಗಾಡಿ ಕಟ್ಟಿದ ‘ಸಾರಥಿ’ ಯಶ್​ರನ್ನು ಏನಂತ ಕರೆದ್ರು ಗೊತ್ತಾ?

ಬೆಂಗಳೂರು : ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡಿ ದರ್ಶನ್ ಮತ್ತು ಯಶ್ ಪ್ರೆಸ್​ಮೀಟ್​ನಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಯಶ್ ಅವರನ್ನು ಹೀರೋ ಎಂದ ದರ್ಶನ್ ಅವರು ತಾನು ಮತ್ತು ಯಶ್ ಅವರನ್ನು ಜೋಡಿ ಎತ್ತುಗಳು ಎಂದ್ರು..!
ಸುಮಲತಾ ಪರ ಪ್ರಚಾರಕ್ಕೆ ದರ್ಶನ್ ಇದ್ರೆ ಸಾಕು, ನಾನ್ಯಾಕೆ ಅಂತ ಸುದೀಪ್ ಹೇಳಿದ್ದಾರೆ. ನೀವೊಬ್ರೇ ಸಾಕಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ದರ್ಶನ್, ‘ನಾನೊಬ್ಬನೇ ಎಲ್ಲಿದ್ದೀನಿ. ನಮ್ ಹೀರೋ ಇದ್ದಾರೆ ಅಂತ ಯಶ್ ಕಡೆ ಕೈ ತೋರಿಸಿದ್ರು. ನಾವು ಒಂಟಿ ಎತ್ತಿನ ಗಾಡಿ ಹೊಡೀತಾ ಇಲ್ಲ. ಜೋಡೆತ್ತಿನ ಗಾಡಿ ಹೊಡೀತಾ ಇದ್ದೀವಿ’ ಅಂತ ಹೇಳಿದ್ರು. ಸುದೀಪ್​ ಅವರು ನೇರವಾಗಿ ಪ್ರಚಾರಕ್ಕೆ ಬರ್ತಾರಾ ಅಥವಾ ಪರೋಕ್ಷವಾಗಿ ಸಪೋರ್ಟ್​ ಮಾಡ್ತಾರಾ ಅನ್ನೋ ಪ್ರಶ್ನೆಗೆ ‘ಅದನ್ನು ಅವರತ್ರನೇ ಕೇಳ್ಬೇಕು’ ಎಂದರು.

ಪ್ರಜ್ವಲ್​ ಪರ ಕ್ಯಾಂಪೇನ್​ಗೆ ಸೈ ಅಂದ್ರು ದರ್ಶನ್​..!

ಸ್ಟಾರ್​ಗಳಾಗಿ ಬಂದಿಲ್ಲ, ಮನೆ ಮಕ್ಕಳಾಗಿ ಬಂದಿದ್ದೇವೆ ಅಂದ್ರು ದರ್ಶನ್​, ಯಶ್..!

ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಕಣಕ್ಕೆ..!

ಲತಾ ಪ್ರೆಸ್​ಮೀಟ್​ – ದರ್ಶನ್​, ಯಶ್ ಸಾಥ್..!

ಮಾ.20ಕ್ಕೆ ನಾಮಪತ್ರ ಸಲ್ಲಿಸಿ ಸುಮಲತಾ ಅಂಬರೀಶ್ ಶಕ್ತಿ ಪ್ರದರ್ಶನ..!

LEAVE A REPLY

Please enter your comment!
Please enter your name here

Most Popular

Recent Comments