Tuesday, September 26, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeಜಿಲ್ಲಾ ಸುದ್ದಿಕ್ರಿಕೆಟಿಗ ಶ್ರೀಶಾಂತ್‌ ಮೇಲಿನ ಅಜೀವ ನಿಷೇಧ ತೆರವು..!

ಕ್ರಿಕೆಟಿಗ ಶ್ರೀಶಾಂತ್‌ ಮೇಲಿನ ಅಜೀವ ನಿಷೇಧ ತೆರವು..!

ನವದೆಹಲಿ: ಕ್ರಿಕೆಟಿಗ ಶ್ರೀಶಾಂತ್​ ಅವರ ಮೇಲಿನ ಅಜೀವ ನಿಷೇಧವನ್ನು ರದ್ದು​ ಮಾಡಿ ಸುಪ್ರೀಂಕೋರ್ಟ್​ ಆದೇಶ ನೀಡಿದೆ. ಹಾಗೆಯೇ ಶ್ರೀಶಾಂತ್​ಗೆ ವಿಧಿಸಿರುವ ಅಜೀವ ನಿಷೇಧ ತೀರ್ಪನ್ನು ಪುನರ್​ ಪರಿಶೀಲಿಸುವಂತೆ ಬಿಸಿಸಿಐನ ಶಿಸ್ತು ಸಮಿತಿಗೆ ಕೋರ್ಟ್​ ನಿರ್ದೇಶಿಸಿದೆ. ಶ್ರೀಶಾಂತ್​ಗೆ ಶಿಕ್ಷೆಯ ಪ್ರಮಾಣವನ್ನು ಇಳಿಸಿ ಮುಂದಿನ ಮೂರು ತಿಂಗಳೊಳಗಾಗಿ ಹೊಸ ತೀರ್ಪು ನೀಡುವಂತೆ ಬಿಸಿಸಿಐ ಶಿಸ್ತು ಸಮಿತಿಗೆ ಕೋರ್ಟ್​ ಸೂಚನೆ ನೀಡಿದೆ.

ತಮ್ಮ ಮೇಲಿನ ಆರೋಪಗಳನ್ನು ಮತ್ತು ಶಿಕ್ಷೆ ರದ್ದುಗೊಳಿಸುವಂತೆ ಶ್ರೀಶಾಂತ್​ ಸಲ್ಲಿಸಿದ ಅರ್ಜಿಯನ್ನು ಕೋರ್ಟ್​ ಪುರಸ್ಕರಿಸಿಲ್ಲ. ಶ್ರೀಶಾಂತ್​ಗೆ ವಿಧಿಸಲಾಗಿರುವ ಶಿಕ್ಷೆಯ ಪ್ರಮಾಣ ಇಳಿಕೆ ಬಗ್ಗೆ ವಿಚಾರಣೆಗೆ ಅವಕಾಶ ನೀಡಲಾಗುತ್ತದೆ ಅಂತ ನ್ಯಾ. ಅಶೋಕ್​ ಭೂಷಣ್​, ಕೆ. ಎಂ ಜೋಸೆಫ್ ಒಳಗೊಂಡ ದ್ವಿಸದಸ್ಯ ಪೀಠ ಸ್ಪಷ್ಟಪಡಿಸಿದೆ.

2017ರ ಅಕ್ಟೋಬರ್​ನಲ್ಲಿ ಬಿಸಿಸಿಐ ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಶ್ರೀಶಾಂತ್​ಗೆ​ ಕ್ರಿಕೆಟ್ ಜೀವನದಿಂದ ಅಜೀವ ನಿಷೇಧ​ ಹೇರಿ ತೀರ್ಪು ನೀಡಿತ್ತು. 2017 ಮೇನಲ್ಲಿ ಏಕಸದಸ್ಯ ಪೀಠ ನಿಷೇಧವನ್ನು ಹಿಂತೆಗೆದುಕೊಂಡು ತೀರ್ಪು ನೀಡಿತ್ತು. ಹಾಗೇ ಶ್ರೀಶಾಂತ್​ ಮೇಲಿನ ಅಜೀವ ನಿಷೇಧವನ್ನು ತೆರವುಗೊಳಿಸುವಂತೆ ಬಿಸಿಸಿಐಗೂ ನಿರ್ದೇಶಿಸಿತ್ತು.

2013ರಲ್ಲಿ ಐಪಿಎಲ್​ನಲ್ಲಿ ಶ್ರೀಶಾಂತ್​ ಮೇಲೆ ಸ್ಪಾಟ್​ ಫಿಕ್ಸಿಂಗ್​ ಆರೋಪ ಕೇಳಿ ಬಂದಿದ್ದು, ವಿಚಾರಣೆ ನಂತರ ಅಜೀವ ನಿಷೇಧವನ್ನು ಹೇರಲಾಗಿತ್ತು.

8 COMMENTS

LEAVE A REPLY

Please enter your comment!
Please enter your name here

Most Popular

Recent Comments