Saturday, April 20, 2024

ಖರ್ಗೆ ಸಿಎಂ ಆಗ್ಬೇಕು ಅಂತ ದೇವೇಗೌಡ್ರು ಹೇಳಿದ್ರೂ ಸೋನಿಯಾ ಗಾಂಧಿಯೇ ಒಪ್ಪಲಿಲ್ವಂತೆ..!

ಮಂಡ್ಯ : ‘ದೋಸ್ತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗಬೇಕು’ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹೇಳಿದ್ದರೂ ಸೋನಿಯಾ ಗಾಂಧಿ ಅವರೇ ಒಪ್ಪಿರಲಿಲ್ಲವಂತೆ..!
ಸ್ವತಃ ಹೆಚ್​.ಡಿ ದೇವೇಗೌಡ ಅವರೇ ಈ ವಿಚಾರವನ್ನು ಹೇಳಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್​ ಸಮಾವೇಶದಲ್ಲಿ ಮಾತನಾಡಿದ ಅವರು,’ದೋಸ್ತಿಯಲ್ಲಿ ಮಲ್ಲಿಕಾರ್ಜುನ್​ ಖರ್ಗೆ ಸಿಎಂ ಆಗಬೇಕು ಎಂದಿದ್ದೆ. ಆದ್ರೆ, ಕಾಂಗ್ರೆಸ್​ ಹೈಕಮಾಂಡ್​ ಸೋನಿಯಾ ಗಾಂಧಿ ಒಪ್ಪಲಿಲ್ಲ. 37 ಸ್ಥಾನ ಪಡೆದಿದ್ರೂ ಕುಮಾರಸ್ವಾಮಿಯೇ ಸಿಎಂ ಆಗ್ಲಿ ಎಂದು ಹೇಳಿದರು’ ಅಂತ ಹೊಸ ಬಾಂಬ್ ಸಿಡಿಸಿದ್ದಾರೆ, ಹಾಗಾದ್ರೆ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗೋದನ್ನು ಸೋನಿಯಾ ಗಾಂಧಿ ಅವರೇ ತಪ್ಪಿಸಿದ್ರಾ?

RELATED ARTICLES

Related Articles

TRENDING ARTICLES