Wednesday, October 4, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜಕೀಯನಿಖಿಲ್ ಹೆಸರನ್ನು ಘೋಷಿಸಿದ ಸಚಿವರು ; ದೇವೇಗೌಡರೇಕೆ ನಿಖಿಲ್​ ಹೆಸರನ್ನು ಘೋಷಿಸಲಿಲ್ಲ..?

ನಿಖಿಲ್ ಹೆಸರನ್ನು ಘೋಷಿಸಿದ ಸಚಿವರು ; ದೇವೇಗೌಡರೇಕೆ ನಿಖಿಲ್​ ಹೆಸರನ್ನು ಘೋಷಿಸಲಿಲ್ಲ..?

ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿಯಾಗಿ ನಿಖಿಲ್​ ಕುಮಾರಸ್ವಾಮಿ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಸಚಿವರಾದ ಡಿ.ಸಿ ತಮ್ಮಣ್ಣ ಮತ್ತು ಸಿ.ಎಸ್​ ಪುಟ್ಟರಾಜು ಅವರು ನಿಖಿಲ್​ ಕುಮಾರಸ್ವಾಮಿ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ರು.
ನಿನ್ನೆ ಹಾಸನದಲ್ಲಿ ಪ್ರಜ್ವಲ್​ ರೇವಣ್ಣ ಅವರ ಹೆಸರನ್ನು ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರೇ ಘೋಷಿಸಿದ್ದರು. ಆದರೆ, ನಿಖಿಲ್ ಅವರ ಹೆಸರನ್ನು ಏಕೆ ಘೋಷಿಸಲಿಲ್ಲ..! ಪ್ರಜ್ವಲ್​ ರೇವಣ್ಣ ಅವರ ಹೆಸರನ್ನು ಘೋಷಿಸುವ ವೇಳೆ ದೇವೇಗೌಡರು ಭಾವುಕರಾಗಿದ್ದರು. ಸಚಿವ ಹೆಚ್​.ಡಿ ರೇವಣ್ಣ, ಶಾಸಕ ಬಾಲಕೃಷ್ಣ ಮತ್ತು ಸ್ವತಃ ಪ್ರಜ್ವಲ್​ ಅವರೂ ಕಣ್ಣೀರಿಟ್ಟಿದ್ದರು. ಹಾಗಾಗಿ ಇಂದು ದೇವೇಗೌಡರು ನಿಖಿಲ್ ಅವರ ಹೆಸರನ್ನು ಘೋಷಿಸಲಿಲ್ಲವೇ ಎಂಬ ಪ್ರಶ್ನೆ ಮೂಡಿದೆ.
ನಿನ್ನೆ ದೇವೇಗೌಡರ ಕುಟುಂಬ ಕಣ್ಣೀರಿಟ್ಟಿರೋದು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಇದೇ ಕಾರಣಕ್ಕೆ ಇಂದು ನಿಖಿಲ್ ಅವರ ಹೆಸರನ್ನು ಗೌಡರು ಘೋಷಿಸಿಲ್ಲ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here

Most Popular

Recent Comments