Wednesday, October 4, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜಕೀಯಬಿಜೆಪಿಗೆ ಬನ್ನಿ, ಗೆಲ್ಲಿಸಿ ಪಾರ್ಲಿಮೆಂಟ್​ಗೆ ಕಳಿಸ್ತೀವಿ: ಮಂಜುಗೆ ರಾಜ್​ಕುಮಾರ್ ಆಹ್ವಾನ..!

ಬಿಜೆಪಿಗೆ ಬನ್ನಿ, ಗೆಲ್ಲಿಸಿ ಪಾರ್ಲಿಮೆಂಟ್​ಗೆ ಕಳಿಸ್ತೀವಿ: ಮಂಜುಗೆ ರಾಜ್​ಕುಮಾರ್ ಆಹ್ವಾನ..!

ಹಾಸನ: ಬಿಜೆಪಿಗೆ ಬನ್ನಿ, ಗೆಲ್ಲಿಸಿ ಪಾರ್ಲಿಮೆಂಟ್​ಗೆ ಕಳುಹಿಸ್ತೇವೆ ಅಂತ ಅರಸೀಕೆರೆ ಬಿಜೆಪಿ ಮಾಜಿ ತಾಲೂಕು ಅಧ್ಯಕ್ಷ ರಾಜ್​​ಕುಮಾರ್ ಹೇಳಿದ್ದಾರೆ.

ಎ.ಮಂಜು ಹಳಸಿದ ಅನ್ನ ಎಂದು ಬಿಜೆಪಿ  ಜಿಲ್ಲಾಧ್ಯಕ್ಷ ಯೋಗಾ ರಮೇಶ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜ್ ಕುಮಾರ್​ ಅವರು, “ಯೋಗಾ ರಮೇಶ್ ಹಿಟ್ಲರ್ ಸಂಸ್ಕೃತಿಯ ವ್ಯಕ್ತಿ. ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ನೀವು ಬಿಜೆಪಿಗೆ ಬನ್ನಿ. ಗೆಲ್ಲಿಸಿ ಪಾರ್ಲಿಮೆಂಟ್​ಗೆ ಕಳಿಸ್ತೀವಿ” ಅಂತ ಕೈ ನಾಯಕ ಎ.ಮಂಜುರನ್ನು ಬಿಜೆಪಿಗೆ ಆಹ್ವಾನಿಸಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಎ. ಮಂಜು ಅವರು ಬಿಜೆಪಿ ಸೇರ್ಪಡೆಯಾಗೋ ಕುರಿತು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧದ ನಡುವೆಯೂ ಬಿಜೆಪಿ ಸೇರೋದಕ್ಕೆ ಮಂಜು ಅವರ ಎಲ್ಲ ಸಿದ್ಧತೆಯನ್ನೂ ನಡೆಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments