Saturday, April 20, 2024

ತಪ್ಪಾಯ್ತು ಕ್ಷಮಿಸಿ ಬಿಡಿ ಅಂತ ಸ್ಪೀಕರ್ ಕಚೇರಿಯಿಂದ ಹೊರಬಂದ ಬಿಜೆಪಿ ನಾಯಕರು!

ಬೆಂಗಳೂರು :  ಬಜೆಟ್​ ದಿನ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರು ಸಿಡಿಸಿದ ‘ಆಪರೇಷನ್​ ಆಡಿಯೋ ಬಾಂಬ್​’ ಬಿಜೆಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸ್ಪೀಕರ್ ರಮೇಶ್ ಕುಮಾರ್ ಅವರ ಸಲಹೆಯಂತೆ ಎಸ್​ಐಟಿ ತನಿಖೆಗೆ ಮೈತ್ರಿ ಒಪ್ಪಿದ್ದು, ಎಸ್ಐಟಿ ತನಿಖೆಗೆ ಒಪ್ಪಿಸಿಯೇ ಸಿದ್ಧ ಅಂತ ಪಟ್ಟು ಹಿಡಿದಿದೆ. ಆದರೆ, ಬಿಜೆಪಿ ಎಸ್​ಐಟಿ ತನಿಖೆಯಲ್ಲಿ ನಂಬಿಕೆಯಿಲ್ಲ. ತನಿಖೆ ಆಗುವುದಾದರೆ ನ್ಯಾಯಾಂಗ ತನಿಖೆಯಾಗಲಿ ಇಲ್ಲವೇ ಸದನ ಸಮಿತಿಗೆ ಒಪ್ಪಿಸಬೇಕು ಅಂತ ಬಿಜೆಪಿ ಪಟ್ಟು ಹಿಡಿದಿದೆ.

ಈ ನಡುವೆ ಬಿಜೆಪಿ ನಾಯಕರು ನಮ್ಮಿಂದ ತಪ್ಪಾಗಿದೆ ಅಂತ ಮತ್ತೊಮ್ಮೆ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಆಗಿದ್ದಾಯ್ತು ಕ್ಷಮಿಸಿಬಿಡಿ ಅಂತ ಸ್ಪೀಕರ್​ ಅವರಲ್ಲಿ ವಿನಮ್ರವಾಗಿ ಮನವಿಯನ್ನೂ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ ಅವರ ಮನವಿ ಹಾಗೂ ಸಲಹೆಯಂತೆ ಇಂದು ಸ್ಪೀಕರ್ ರಮೇಶ್ ಕುಮಾರ್ ಅವರು ಮೂರು ಪಕ್ಷಗಳ ನಾಯಕರ ಸಭೆಯನ್ನು ಕರೆದಿದ್ದರು.  ಈ ವೇಳೆ ಸಭೆಗೆ ಹಾಜರಾದ ಬಿಜೆಪಿ ನಾಯಕರು ‘ನಮ್ಮಿಂದ ತಪ್ಪಾಯ್ತು. ಆಗಿದ್ದಾಗಿದೆ ದಯವಿಟ್ಟು ಕ್ಷಮಿಸಿ ಬಿಡಿ’ ಅಂತ  ಮನವಿ ಮಾಡಿ ಸಭೆಯನ್ನು ಅರ್ಧಕ್ಕೆ ಬಿಟ್ಟು ಸ್ಪೀಕರ್ ಕೊಠಡಿಯಿಂದ ಹೊರಬಂದಿದ್ದಾರೆ.  ಒಟ್ಟಾರೆ ಸ್ಪೀಕರ್​ ಕೊಠಡಿಯಲ್ಲಿ ನಡೆದ ಸಭೆ ವಿಫಲವಾಗಿದ್ದು, ಸರ್ಕಾರ ಎಸ್​ಐಟಿ ತನಿಖೆಗೆ ಒಪ್ಪಿಸೋದು ಬಹುತೇಕ ಖಚಿತ.

RELATED ARTICLES

Related Articles

TRENDING ARTICLES