Saturday, April 27, 2024

ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಡಿಸಿಎಂ ಔತಣಕೂಟ..!

ಬೆಂಗಳೂರು: ಆಪರೇಷನ್ ಕಮಲದ ಭೀತಿಯಲ್ಲಿರುವ ಮೈತ್ರಿ ಸರ್ಕಾರದ ವರಿಷ್ಠರು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಡಾ. ಜಿ ಪರಮೇಶ್ವರ್​ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗಾಗಿ ಔತಣಕೂಟವನ್ನು ಏರ್ಪಡಿಸಿದ್ದಾರೆ.

ಫೆಬ್ರವರಿ 6ರಂದು ಬೆಂಗಳೂರಿನ ರ್ಯಾಡಿಸನ್ ಬ್ಲ್ಯೂ ಹೊಟೇಲ್​ನಲ್ಲಿ ಔತಣಕೂಟು ಆಯೋಜಿಸಲಾಗಿದೆ. ಈ ಭೋಜನಕೂಟಕ್ಕೆ ಬೆಂಗಳೂರಿನ ಕಾಂಗ್ರೆಸ್​ ಸಂಸದರಿಗೂ ವಿಶೇಷ ಆಹ್ವಾನ ನೀಡಲಾಗಿದ್ದು, ಎರಡೂ ಪಕ್ಷದ ಪ್ರಮುಖರು ಆಪರೇಷನ್​ ಕಮಲಕ್ಕೆ ಪ್ರತ್ಯುತ್ತರ ನೀಡುವ ಕುರಿತು ಚರ್ಚಿಸಲಿದ್ದಾರೆ.

ಬಜೆಟ್ ಅಧಿವೇಶನದ ಮೇಲೆ ಆಪರೇಷನ್ ಕರಿನೆರಳು ಬೀಳುವ ಸಾಧ್ಯತೆಗಳ ಕುರಿತು ವರಿಷ್ಠರು ಚಿಂತೆಗೆ ಬಿದ್ದಿದ್ದಾರೆ. ಆಪರೇಷನ್ ಕಮಲದ ಭಯಕ್ಕೆ ತತ್ತರಿಸಿರುವ ಕೈ-ತೆನೆ ನಾಯಕರು ಶಾಸಕರನ್ನು ಉಳಿಸಕೊಳ್ಳುವಲ್ಲಿ ಹೆಚ್ಚು ಗಮನ ಕೊಡುತ್ತಿದ್ದಾರೆ.

RELATED ARTICLES

Related Articles

TRENDING ARTICLES