Saturday, April 20, 2024

ಸೆಮಿಫೈನಲ್​ಗೆ ಮನೀಷ್ ಪಾಂಡೆ ಪಡೆ

ಪ್ರಸಕ್ತ ಸಾಲಿನ ರಣಜಿಯಲ್ಲಿ ಕರ್ನಾಟಕ  ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್​​​ ಫೈನಲ್​ನಲ್ಲಿ​ ರಾಜಸ್ಥಾನವನ್ನು6 ವಿಕೆಟ್​​ಗಳಿಂದ ಮಣಿಸಿದ ಕರ್ನಾಟಕ ಗೆಲುವಿನ ಕೇಕೆ ಹಾಕಿದೆ.

ಗೆಲ್ಲಲು 184 ರನ್​ಗಳ ಗುರಿ ಪಡೆದಿದ್ದ ಮನೀಷ್​ ಪಾಂಡೆ ಬಳಗ 3 ವಿಕೆಟ್​​ ನಷ್ಟಕ್ಕೆ 45 ರನ್​​ಗಳೊಂದಿಗೆ ದಿನದಾಟ ಆರಂಭಿಸಿತು. ದಿನದಾಟದ ಆರಂಭದಲ್ಲೇ ನೈಟ್​ ವಾಚಮನ್​ ರೋನಿತ್​ ಮೋರೆ (8) ಔಟಾದ್ರು. ಬಳಿಕ ಜೊತೆಯಾದ ಕರುಣ್​ ನಾಯರ್​ ಹಾಗೂ ನಾಯಕ ಮನೀಷ್​​ ಪಾಂಡೆ ಜೋಡಿ ಅಮೋಘ ಜೊತೆಯಾಟವಾಡಿತು. ಮನೀಷ್​ ಪಾಂಡೆ ಅಜೇಯ 87 ರನ್​ ಸಿಡಿಸಿದ್ರೆ, ಕರುಣ್​ ನಾಯರ್​ ಅಜೇಯ 61 ರನ್​ಗಳನ್ನ ಕಲೆಹಾಕಿದ್ರು. ಬರೋಬ್ಬರಿ 129 ರನ್​ಗಳ ಜೊತೆಯಾಟವಾಡಿದ ಇವರು 47.5 ಓವರ್​ಗಳಲ್ಲಿ ತಂಡವನ್ನು ಗೆಲುವಿನ ದಡ ಸೆರಿಸಿದ್ರು.

ಇನ್ನು ಪಂದ್ಯದಲ್ಲಿ ಬೆಸ್ಟ್​​ ಫರ್ಪಾಮೆನ್ಸ್​​ ನೀಡಿದ ವಿನಯ್​ ಕುಮಾರ್​ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಜಯದೊಂದಿಗೆ ಕರ್ನಾಟಕ ಅಂತಿಮ 4ರ ಸುತ್ತಿಗೆ ಪ್ರವೇಶ ಪಡೆದಿದ್ದು, ಇದೇ 24ರಂದು ನಡೆಯುವ ಸೆಮಿಫೈನಲ್​ ಪಂದ್ಯದಲ್ಲಿ ಸೌರಾಷ್ಟ್ರ ಅಥವಾ ಉತ್ತರ ಪ್ರದೇಶ ತಂಡವನ್ನು ಎದುರಿಸಲಿದೆ.

RELATED ARTICLES

Related Articles

TRENDING ARTICLES