Thursday, March 28, 2024

ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡೋದೇ ನಮ್ಮ ಗುರಿ: ಮಾಯಾವತಿ

ನವದೆಹಲಿ: ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವುದೇ ನಮ್ಮ ಗುರಿ ಅಂತ ಬಿಎಸ್​ಪಿ ನಾಯಕಿ ಮಾಯಾವತಿ ತಿಳಿಸಿದ್ದಾರೆ. ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಗುಳಿಯುವಂತೆ ಮಾಡಲು ಬಿಎಸ್​ಪಿ(ಬಹುಜನ ಸಮಾಜ ಪಕ್ಷ) ಕಾಂಗ್ರೆಸ್​​ನ್ನು ಬೆಂಬಲಿಸಲಿದೆ ಅಂತ ಅವರು ಹೇಳಿದ್ದಾರೆ.

“ರಾಜಸ್ಥಾನದಲ್ಲಿಯೂ ನಾವು ಕಾಂಗ್ರೆಸ್​ಗೆ ಬೆಂಬಲ ನೀಡುತ್ತೇವೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬದೇ ನಮ್ಮ ಉದ್ದೇಶ” ಎಂದಿದ್ಧಾರೆ. ಮಧ್ಯಪ್ರದೇಶದಲ್ಲಿ ಬಿಎಸ್​ಪಿ 230 ಸ್ಥಾನಗಳಲ್ಲಿ 2 ಸ್ಥಾನ ಗಳಿಸಿದೆ. ಕಾಂಗ್ರೆಸ್​ 114 ಮತಗಳನ್ನು ಗಳಿಸಿದ್ದರೂ, ಬಹುಮತ ಪಡೆಯುವಲ್ಲಿ ವಿಫಲವಾಗಿದೆ.

RELATED ARTICLES

Related Articles

TRENDING ARTICLES