Friday, March 29, 2024

ಶಬರಿಮಲೆ ವಿವಾದ: ಕೊಚ್ಚಿಯಲ್ಲಿ ಬಿಜೆಪಿ ತಂಡ

ಕೊಚ್ಚಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಸೂಚನೆಯಂತೆ ನಾಲ್ಕು ಸದಸ್ಯರ ತಂಡ ಶಬರಿಮಲೆ ಕುರಿತಾದ ಮಾಹಿತಿ ಸಂಗ್ರಹಿಸಲು ಕೇರಳ ತಲುಪಿದೆ. ಕೊಚ್ಚಿಯಲ್ಲಿ ಶಬರಿಮಲೆ ಭಕ್ತರು ಹಾಗೂ ಆರ್​ಎಸ್​ಎಸ್​ ಕಾರ್ಯಕರ್ತರನ್ನು ಭೇಟಿ ಮಾಡಲಿರುವ ತಂಡ ವಿವಾದದ ಕುರಿತಾದ ವಿವರವಾದ ಮಾಹಿತಿ ಪಡೆಯಲಿದ್ದಾರೆ. ಸರೋಜ್​ಪಾಂಡೆ, ವಿನೋದ್ ಸೋನ್​ಕರ್​, ಪ್ರಹ್ಲಾದ್​ ಜೋಶಿ ಹಾಗೂ ನಳಿನ್​ ಕುಮಾರ್​ ಕಟೀಲ್​ ಅವರನ್ನು ಒಳಗೊಂಡ ತಂಡ ತಳಮಟ್ಟದಲ್ಲಿ ಮಾಹಿತಿ ಪಡೆದು 15 ದಿನಗಳೊಳಗಾಗಿ ಅಮಿತ್​ ಶಾ ಅವರಿಗೆ ವರದಿ ನೀಡಲಿದೆ. ಹಾಗೇ ಪಂದಳ ರಾಜಕುಟುಂಬವನ್ನು ಭೇಟಿ ಮಾಡಲಿದೆ.

RELATED ARTICLES

Related Articles

TRENDING ARTICLES