Saturday, April 20, 2024

ನಮ್ಮ ಕಾರು ನಮ್ಗೆ, ನಿಮ್ಮ ಕಾರು ನಿಮ್ಗೆ : ಶಿಸ್ತು ಮೆರೆದ ಸಿದ್ದರಾಮಯ್ಯ..!

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಸ್ತು ಮೆರೆದಿದ್ದಾರೆ. ‘ನಮ್ಮ ಕಾರು ನಮ್ಗೆ ನಿಮ್ಮ ಕಾರು ನಿಮ್ಗೆ’ ಅಂತ ಮೇಯರ್ ಗೆ ಶಿಸ್ತಿನ ಪಾಠ ಮಾಡಿದ್ದಾರೆ.
ತಮ್ಮ ಕಾರಿನಲ್ಲಿ ಬರುವಂತೆ ಮೈಸೂರು ಮೇಯರ್ ಕರೆದಾಗ ಸಿದ್ದರಾಮಯ್ಯ ಅವರು ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ್ದಾರೆ.
ಏರ್​ಪೋರ್ಟ್​ನಲ್ಲಿ ಮೈಸೂರು ಮೇಯರ್​ ಪುಷ್ಪಲತಾ ಜಗನ್ನಾಥ್​ ಮಾಜಿ ಸಿಎಂ ಅವರನ್ನು ‘ಸಾರ್ ನಮ್ ಕಾರಲ್ಲಿ ಬನ್ನಿ’ ಅಂತ ಕರೆದ್ರು. ಆದ್ರೆ, ಸಿದ್ದರಾಮಯ್ಯ. ”ನಾನೀಗ ಸರ್ಕಾರದಲ್ಲಿಲ್ಲ, ಅದು ಮೇಯರ್​ ಕಾರು. ನಿಮ್ಮ ಕಾರಿನಲ್ಲಿ ನೀವು ಬನ್ನಿ. ಮೇಯರ್ ಕಾರು ಮೇಯರ್ ಗೆ ನಮ್ ಕಾರು ನಮ್ಗೆ” ಅಂತ ಹೇಳಿದ್ರು.

RELATED ARTICLES

Related Articles

TRENDING ARTICLES