ಲೋಕಸಭಾ ಎಲೆಕ್ಷನ್ ಫಸ್ಟ್…ಆಮೇಲೇನಿದ್ರು ಸಿನಿಮಾ ಬಗ್ಗೆ ಯೋಚನೆ ಮಾಡೋದು ಅಂತ ಟಾಲಿವುಡ್ ಸ್ಟಾರ್ ನಟ ಪವನ್ ಕಲ್ಯಾಣ್ ತಿಳಿಸಿದ್ದಾರೆ.
ಪವನ್ ಕಲ್ಯಾಣ್ ಹೊಸ ಸಿನಿಮಾಕ್ಕೆ ಸಹಿ ಮಾಡಿದ್ದಾರೆ. ಎಲೆಕ್ಷನ್ ಗೂ ಮುನ್ನ ಸಿನಿಮಾವೊಂದರಲ್ಲಿ ನಟಿಸ್ತಾರೆ ಅಂತ ಸುದ್ದಿ ಹಬ್ಬಿತ್ತು. ಈ ಬಗ್ಗೆ ಸ್ವತಃ ಪವನ್ ಕಲ್ಯಾಣ್ ಅವರೇ ಸ್ಪಷ್ಟನೆ ನೀಡಿದ್ದಾರೆ.
‘ನಾನು ಹೊಸ ಚಿತ್ರಕ್ಕೆ ಸಹಿ ಮಾಡಿದ್ದೀನಿ ಅಂತ ಸುದ್ದಿಯೊಂದು ಹರಿದಾಡ್ತಿದೆ. ಇದು ಶುದ್ಧ ಸುಳ್ ಸುದ್ದಿ. ನಂಗೆ ಸಿನಿಮಾದಲ್ಲಿ ನಟಿಸೋಕೆ ಸದ್ಯಕ್ಕೆ ಟೈಮ್ ಇಲ್ಲ. ನಾನು ಲೋಕಸಭಾ ಎಲೆಕ್ಷನ್ ಮುಗಿಯೋ ತನಕ ಯಾವ್ದೇ ಸಿನಿಮಾ ಮಾಡಲ್ಲ. ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿ ಕೊಳ್ಳೋಕೆ ಉದ್ದೇಶಿಸಿದ್ದೇನೆ” ಅಂತ ತಿಳಿಸಿದ್ದಾರೆ.
ಪವನ್ ಕಲ್ಯಾಣ್ 2014ರಲ್ಲಿ ಜನಸೇನಾ ಪಾರ್ಟಿ ಸ್ಥಾಪನೆ ಮೂಲಕ ರಾಜಕೀಯರಂಗಕ್ಕೆ ಅಧಿಕೃತ ಎಂಟ್ರಿಕೊಟ್ಟಿದ್ದರು. 2018 ಜನವರಿ 9ರಂದು ರಿಲೀಸ್ ಆದ ‘ಅಜ್ಞಾತವಾಸಿ’ ಪವನ್ ಕಲ್ಯಾಣ್ ಅವರ ಕೊನೇ ಸಿನಿಮಾ ಆಗಿದೆ.