Friday, April 19, 2024

ಪ್ರಜ್ಞೇಶ್ ಗುಣೇಶ್ವರನ್ ಬೆಂಗಳೂರು ಓಪನ್ ಚಾಂಪಿಯನ್

ತಮಿಳುನಾಡಿನ ಪ್ರಜ್ಞೇಶ್ ಗುಣೇಶ್ವರನ್ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ನಾಲ್ಕನೇ ಶ್ರೇಯಾಂಕದ ಆಟಗಾರ ಪ್ರಜ್ಞೇಶ್‌ ಗುಣೇಶ್ವರನ್‌, ಬಿಗಿಯಾದ ಸರ್ವ್ ಹಾಗೂ ಮಿಂಚಿನ ಏಸ್​ಗಳ ಮೂಲಕ ಅನುಭವಿ ಆಟಗಾರ ಸಾಕೇತ್​ ಮೈನಾನಿಯನ್ನ ಪರಾಭವಗೊಳಿಸಿದ್ರು.
ಶನಿವಾರ ರಾತ್ರಿ ಕಬ್ಬನ್‌ ಪಾರ್ಕ್‌ನಲ್ಲಿರುವ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಮೈದಾನದ ಸೆಂಟರ್​ಕೋರ್ಟ್​ನಲ್ಲಿ 57 ನಿಮಿಷಗಳ ಕಾಲ ಪೈನಲ್​ ಹೋರಾಟ ನಡೆಯಿತು. ಈ ಅಂತಿಮ ಹಣಾಹಣಿಯಲ್ಲಿ ಚೆನ್ನೈನ ಆಟಗಾರ ಪ್ರಜ್ಞೇಶ್‌ 6-2, 6-2 ಸೆಟ್​ಗಳಿಂದ ಸಾಕೇತ್​ ವಿರುದ್ಧ ಜಯ ಸಾಧಿಸಿದ್ರು.
ವಿಜೇತ ಪ್ರಜ್ಞೇಶ್ ಗುಣೇಶ್ವರನ್ 15 ಲಕ್ಷ ರೂ. ಬಹುಮಾನ ಜಯಿಸಿದರೆ, ರನ್ನರ್​ಅಪ್ ಸಾಕೇತ್ ಮೈನೇನಿ 9 ಲಕ್ಷ ರೂ. ಪಡೆದರು.

RELATED ARTICLES

Related Articles

TRENDING ARTICLES