ಮುಂಗಾರು ಮಳೆ ಖ್ಯಾತಿಯ ಸ್ಯಾಂಡಲ್ ವುಡ್ ನಟ ನೀನಾಸಂ ಅಶ್ವಥ್ ಮೇಲೆ ವಂಚನೆ ಆರೋಪ ಕೇಳಿಬಂದಿದೆ. ಅಶ್ವಥ್ ಗೆಳೆಯ ರಜತ್ ದ್ವಾರಕ್ ಅವ್ರಿಂದ 18 ಲಕ್ಷ ಪಡೆದು ವಂಚಿಸಿದ್ದಾರೆ ಅಂತ ಹೇಳಲಾಗ್ತಿದೆ.
ಮಂಡ್ಯ ಬಳಿ ಫಾರ್ಮ್ ಹೌಸ್ ಮಾಡೋಕೆ ಪಾಲುದಾರಿಕೆ ಆಮಿಷವೊಡ್ಡಿ ಅಶ್ವಥ್ ನನ್ನಿಂದ 18 ಲಕ್ಷ ರೂ ಪಡೆದಿದ್ರು. ಆದ್ರೆ, 3 ಲಕ್ಷ ಮಾತ್ರ ವಾಪಸ್ಸುಕೊಟ್ಟು ಉಳಿದ ಹಣವನ್ನು ಕೊಟ್ಟಿಲ್ಲ ಅಂತ ರಜತ್ ಆರೋಪಿಸಿದ್ದಾರೆ. ಈ ಬಗ್ಗೆ ಕಲಾವಿದರ ಸಂಘ ಹಾಗೂ ಫಿಲ್ಮ್ ಚೇಂಬರ್ ಮೆಟ್ಟಿಲೇರ್ತೀನಿ ಅಂತಲೂ ಅವ್ರು ಹೇಳಿದ್ದಾರೆ.