ಕೇಂದ್ರ ಸಚಿವ ಅನಂತ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಅನಂತ ಕುಮಾರ್ ಅವರಿಲ್ಲದೆ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಲು ಆಗುತ್ತಿರಲಿಲ್ಲ. ಇಂದು ರಾಜ್ಯದಲ್ಲಿ ಬಿಜೆಪಿ ಈ ಮಟ್ಟದಲ್ಲಿರಲು ಅನಂತ ಕುಮಾರ್ ಅವರ ಕೊಡುಗೆ ಅಪಾರ ಅಂತ ಸ್ಮರಿಸಿದ್ದಾರೆ.
ಕೇಂದ್ರದಲ್ಲಿ ಬೇರೆ ಬೇರೆ ಇಲಾಖೆಗಳಲ್ಲಿ ಸಚಿವರಾಗಿ ಇಡೀ ದೇಶಕ್ಕೆ ಅನಂತ ಕುಮಾರ್ ಅವರು ಪರಿಚಯ ಆಗಿದ್ದಾರೆ. ಇವರ ನಿಧನದ ಸುದ್ದಿಯಿಂದ ಬಹಳಾ ಆಘಾತಕ್ಕೆ ಒಳಗಾಗಿದ್ದೇನೆ ಅಂತ ಯಡಿಯೂರಪ್ಪ ಹೇಳಿದ್ದಾರೆ.
ಅನಂತ ಕುಮಾರ್ ಅವರನ್ನು ಕೇಳದೆ ನಾನು ಸಾಮಾನ್ಯವಾಗಿ ಯಾವ್ದೇ ತೀರ್ಮಾನ ಕೈಗೊಳ್ಳುತ್ತಿರಲಿಲ್ಲ. ನಾನು ಉಪಮುಖ್ಯಮಂತ್ರಿ ಆಗಿದ್ದಾಗ ಅವ್ರು ಹಣಕಾಸು ಸಚಿವರಾಗಿದ್ದರು. ಅವರನ್ನು ಕಳೆದು ಕೊಂಡ ದೇಶ, ನಾಡು, ಪಕ್ಷ ಬಡವಾಗಿದೆ ಅಂತ ಬಿಎಸ್ ವೈ ಕಂಬನಿ ಮಿಡಿದಿದ್ದಾರೆ.
ಅನಂತ ಕುಮಾರ್ ನಿಧನಕ್ಕೆ ಕಂಬನಿ ಮಿಡಿದ ಪ್ರಧಾನಿ
ಯಾವ್ದೇ ಸರ್ಕಾರವಿದ್ದರೂ ರಾಜ್ಯವನ್ನು ಸಮರ್ಥಿಸಿಕೊಳ್ತಿದ್ರು ಅನಂತ್ ಕುಮಾರ್