8 ತಿಂಗಳ ಹಿಂದೆ ಕಾಣೆ ಆಗಿದ್ದ ‘ಅವನು’ ‘ಅವಳಾಗಿ’ ಸಿಕ್ಕಿದ್ದಾನೆ. ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಹಳ್ಳಿಯೊಂದರ ಬಾಲಕ ಬೆಂಗಳೂರಿನಲ್ಲಿನ ತನ್ನ ಚಿಕ್ಕಮ್ಮನ ಮನೆಗೆ ಹೋಗ್ತೀನಿ ಅಂತ ಹೊರಟಿದ್ದ ಈತ ಸಿಕ್ಕಿದ್ದು ತೃತೀಯ ಲಿಂಗಿಯಾಗಿ..!
ಬಾಲಕ ಬೆಂಗಳೂರಿನ ಚಿಕ್ಕಮ್ಮನ ಮನೆಯಲ್ಲಿ ಉಳಿದುಕೊಂಡು 10ನೆ ತರಗತಿ ಓದುತ್ತಿದ್ದ. ಶಾಲೆಗೆ ರಜೆ ಇದ್ದಿದ್ದರಿಂದ ಊರು ಕೆಆರ್ ಪೇಟೆಗೆ ಬಂದಿದ್ದ, ರಜಾ ಮುಗಿಸಿ ಬೆಂಗಳೂರಿಗೆ ವಾಪಸ್ಸು ಹೋಗುವುದಾಗಿ ಹೊರಟವನು ಸಿಕ್ಕೇ ಇರಲಿಲ್ಲ. ಬೆಂಗಳೂರಿಗೆ ಅಂತ ಹೊರಟಿದ್ದ ಮಗ ಅಲ್ಲಿಗೆ ಹೋಗದಿರುವುದನ್ನು ತಿಳಿದ ಮನೆಯವರು ಕೆಆರ್ ಪೇಟೆ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಂಟ್ ಕೊಟ್ಟಿದ್ರು. ಆದ್ರೆ, ಬಾಲಕ ಸಿಕ್ಕಿರ್ಲಿಲ್ಲ.
ಆದ್ರೆ, ನಿನ್ನೆ ಬಾಲಕನ ಗ್ರಾಮದ ಮಂಜು ಅನ್ನೋರು ಕೆ.ಆರ್ ಪೇಟೆ ಸಂತೆಗೆ ಹೋಗಿದ್ದಾಗ, ಬಾಲಕ ಮಂಗಳಮುಖಿಯರ ಗುಂಪಲ್ಲಿದ್ದ..! ಮಂಗಳಮುಖಿಯಾಗಿ ಕಲೆಕ್ಷನ್ ಮಾಡ್ತಿದ್ದ ಈತ ಮಂಜು ಅವ್ರನ್ನು ನೋಡಿದ ಕೂಡಲೇ ಅಲ್ಲಿಂದ ಇತರ ಮಂಗಳಮುಖಿಯರೊಂದಿಗೆ ಸೇರಿ ಎಸ್ಕೇಪ್ ಆಗಲು ಯತ್ನಿಸಿದ. ಸ್ಥಳೀಯರು ಆ ಗುಂಪನ್ನು ಹಿಂಬಾಲಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ರು. ಬಳಿಕ ದುಡ್ಡು ಮಾಡೋಕಾಗಿ ಬಾಲಕನ ಲಿಂಗಪರಿವರ್ತನೆ ಮಾಡಲಾಗಿದೆ ಅನ್ನಲಾಗುತ್ತಿದ್ದು, ಮಂಡ್ಯದಲ್ಲೂ ಲಿಂಗಪರಿವರ್ತನೆ ಜಾಲ ಇರುವ ಶಂಕೆ ವ್ಯಕ್ತವಾಗಿದೆ.