Thursday, March 28, 2024

ವಿಜಯ್ ಮನವಿ ಪುರಸ್ಕರಿಸಿದ ಪೊಲೀಸರು..!

ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಅವರ ಮನವಿಯನ್ನು ಪೊಲೀಸರು ಪುರಸ್ಕರಿಸಿದ್ದಾರೆ. ವಿಜಯ್ ಮನವಿ ಮೇರೆಗೆ ಮಗಳು ಮೋನಿಕ ಅವ್ರನ್ನು ಗಿರಿನಗರ ಪೊಲೀಸರು ಮನೆಗೆ ಕಳುಹಿಸಿದ್ದಾರೆ.‌ ಕೀರ್ತಿಗೌಡ ಮೇಲೆ ನಾಗರತ್ನ ಹಲ್ಲೆ ನಡೆಸಿದ್ದಾರೆ ಅನ್ನಲಾದ ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ವಿಜಯ್ ಮಕ್ಕಳನ್ನು ವಿಚಾರಣೆಗೆಂದು ಸ್ಟೇಷನ್ ಗೆ ಕರ್ಕೊಂಡು ಹೋಗಿದ್ರು. ಆದ್ರೆ, ವಿಜಯ್ ಮತ್ತು ಕೀರ್ತಿ ಗೌಡ ನಮ್ಮಿಂದ ಮಕ್ಕಳಿಗೆ ತೊಂದ್ರೆ ಆಗಬಾರದೆಂದು ಪೊಲೀಸ್ ಸ್ಟೇಷನ್ ಗೆ ಹೋಗಿ ಮಕ್ಕಳನ್ನು ಆರೋಪಿಗಳನ್ನಾಗಿ ಮಾಡುವುದು ಬೇಡ ಅಂತ‌ ಮನವಿ ಮಾಡಿದ್ರು. ವಿಜಿ ಮನವಿಯನ್ನು ಪುರಸ್ಕರಿಸಿದ ಪೊಲೀಸರು ಮಗಳನ್ನು ಮನೆಗೆ ಕಳುಹಿಸಲು ಒಪ್ಪಿದ್ದಾರೆ. ಮಗಳ ಮೇಲೆ ಯಾವುದೇ ಬೇಸರ ಇಲ್ಲ. ಆದ್ರೆ, ಇಷ್ಟು ದಿನ ನನ್ ಜೊತೆ ಚೆನ್ನಾಗಿ ಇದ್ದರು. ಈಗ ಅಮ್ಮನ ಜೊತೆ ಹೋಗಿ ತಪ್ಪು ಮಾಡಿದ್ರು ಅಂತ ಅನಿಸ್ತಿದೆ.‌ ಆ ಬೇಜಾರಿದೆ ಅಂತ ವಿಜಯ್ ಹೇಳಿದ್ದಾರೆ. ಅದೇರೀತಿ‌ ಕೀರ್ತಿಗೌಡ ಕೂಡ ಈ ಗಲಾಟೆಯಲ್ಲಿ‌ ಮಕ್ಕಳನ್ನು ಎಳೆದು ತರೋದು ಬೇಡ ಅಂತ ತೀರ್ಮಾನ ಮಾಡಿದ್ದಾರೆ.‌ಓದೋ ಮಕ್ಕಳನ್ನು ಪೊಲೀಸ್ ಸ್ಟೇಷನ್ , ಕೋರ್ಟ್ ಅಂತ ಅಲೆಸೋದು ಬೇಡ ಅನ್ನೋದು ವಿಜಿ ಮತ್ತು ಕೀರ್ತಿ ಅವ್ರ ಅಭಿಪ್ರಾಯ.

RELATED ARTICLES

Related Articles

TRENDING ARTICLES