ಎಐಎಡಿಎಂಕೆಯ 18 ಶಾಸಕರನ್ನು ಅನರ್ಹಗೊಳಿಸಿರೋದನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ. ಇದ್ರಿಂದಾಗಿ ಟಿಟಿವಿ ದಿನಕರನ್ ಗುಂಪಿಗೆ ಭಾರೀ ಹಿನ್ನಡೆ ಆಗಿದೆ. ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದ ದಿನಕರನ್ ಬಣದ 18 ಶಾಸಕರು ಆಗಸ್ಟ್ ತಿಂಗಳಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಸರ್ಕಾರದ ಬಗ್ಗೆ ತಮ್ಗೆ ವಿಶ್ವಾಸ ಇಲ್ಲ ಅಂತ ಆರೋಪಿಸಿದ್ರು. ಅಷ್ಟೇ ಅಲ್ದೆ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದಿದ್ರು. ಇದಾದ ಬೆನ್ನಲ್ಲೇ ತಂಗ ತಮಿಳ್ಸೆಲ್ವ ಸೇರಿ 18 ಬಂಡಾಯ ಶಾಸಕರನ್ನು ಅನರ್ಹಗೊಳಿಸಲಾಗಿತ್ತು. ಅಷ್ಟೇ ಅಲ್ದೆ, ತಮಿಳುನಾಡು ವಿಧಾನಸಭೆ ಪಕ್ಷಾಂತರ ನಿಷೇಧ ನಿಯಮಾವಳಿ ಅನ್ವಯ ಅವರನ್ನು ಅನರ್ಹಗೊಳಿಸಲಾಗಿದೆ ಅಂತ ಸ್ಪಷ್ಟನೆಯನ್ನೂ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಅನರ್ಹ ಶಾಸಕರು ಹೈಕೋರ್ಟ್ ಮೆಟ್ಟಿಲೇರಿದ್ರು. ಮೇಲ್ಮನವಿ ವಿಚಾರಣೆ ಮಾಡಿದ ನ್ಯಾ. ಎಂ ಸತ್ಯನಾರಾಯಣ್ ಅವ್ರು ಶಾಸಕರನ್ನು ಅನರ್ಹಗೊಳಿಸಿದ್ದ ತಮಿಳುನಾಡು ಅಸೆಂಬ್ಲಿ ಸ್ಪೀಕರ್ ನಿರ್ಧಾರವನ್ನು ಎತ್ತಿಹಿಡಿದಿದ್ದಾರೆ.