Wednesday, April 24, 2024

ಮುಟ್ಟಾದಾಗ ಫ್ರೆಂಡ್ಸ್ ಮನೆಗೆ ಹೋಗ್ತೀರಾ ಹೇಳಿಕೆ ಸಮರ್ಥಿಸಿಕೊಂಡ ಸ್ಮೃತಿ..!

ಮುಂಬೈನಲ್ಲಿ ನಡೆದ ಯಂಗ್ ಥಿಂಕರ್ಸ್ ಸಮ್ಮೇಳನದಲ್ಲಿ ನೀಡಿದ್ದ ಹೇಳಿಕೆಯನ್ನು ಕೇಂದ್ರಸಚಿವೆ ಸ್ಮೃತಿ ಇರಾನಿ ಸಮರ್ಥಿಸಿಕೊಂಡಿದ್ದಾರೆ.
ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತಾಡಿದ್ದ ಸ್ಮೃತಿ, ‘ ಮುಟ್ಟಾದಾಗ ಫ್ರೆಂಡ್ಸ್ ಮನೆಗೆ ಹೋಗ್ತೀರಾ?’ ಅಂತ ಕೇಳಿದ್ರು.
ಯಾರಾದ್ರು ಮುಟ್ಟಾದಾಗ ರಕ್ತದ ಸ್ಯಾನಿಟರಿ ನ್ಯಾಪ್ಕಿನ್ ಜೊತೆಗೆ ಫ್ರೆಂಡ್ಸ್ ಮನೆಗೆ ಹೋಗ್ತಾರಾ? ನಮ್ಗೆ ಪ್ರಾರ್ಥಿಸೋ ಹಕ್ಕಿದೆಯೇ ಹೊರತು ಅಪವಿತ್ರಗೊಳಿಸೋ ಹಕ್ಕಿಲ್ಲ ಅಂತ ಸ್ಮೃತಿ ಹೇಳಿದ್ರು.
ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತಂತೆ ನೀಡಿದ್ದ ಈ ಹೇಳಿಕೆಗೆ ಸಿಕ್ಕಾಪಟ್ಟೆ ಟೀಕೆಗಳು ಬಂದಿದ್ವು. ಇವತ್ತು ಸ್ಮೃತಿ ಟ್ವೀಟರ್ ನಲ್ಲಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಂಗೆ ನನ್ನದೇ ಆದ ದೃಷ್ಟಿಕೋನ ಹೊಂದೋ ಸ್ವಾತಂತ್ರ್ಯವಿಲ್ಲ. ಆದ್ರೆ ಉದಾರ ದೃಷ್ಟಿಕೋನವನ್ನು ನಾನು ಒಪ್ತೀನಿ ಅಂತ ಸ್ಮೃತಿ ಹೇಳಿದ್ದಾರೆ. ಇದನ್ನು ಕೂಡ ನೆಟ್ಟಿಗರು ವಿರೋಧಿಸ್ತಿದ್ದಾರೆ

RELATED ARTICLES

Related Articles

TRENDING ARTICLES