Thursday, December 7, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeಜಿಲ್ಲಾ ಸುದ್ದಿಸೈಕಲ್  ಏರಿ ಯಾತ್ರೆ ಹೊರಟ ಸಹಕಾರಿ ಸಚಿವ..!

ಸೈಕಲ್  ಏರಿ ಯಾತ್ರೆ ಹೊರಟ ಸಹಕಾರಿ ಸಚಿವ..!

ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪುರ ಸೈಕಲ್ ಸವಾರಿ ಹೊರಟಿದ್ದಾರೆ. ಮಹಾರಾಷ್ಟ್ರದ ಉಸ್ಮಾನಬಾದ್ ಜಿಲ್ಲೆಯಲ್ಲಿರೋ ತುಳಜಾಪುರ ಅಂಬಾ ಭವಾನಿ ಟೆಂಪಲ್ ಕಡೆಗೆ ಸಚಿವರು ಸೈಕಲ್ ಏರಿ ಪ್ರಯಾಣ ಬೆಳೆಸಿದ್ದಾರೆ.

ಈ ದೇವಸ್ಥಾನ ಬೀದರ್ ನಿಂದ 200 ಕಿಲೋಮೀಟರ್ ದೂರದಲ್ಲಿದೆ. ಇಷ್ಟೊಂದು ದೂರ ಸಚಿವರೇ ಸೈಕಲ್ ತುಳಿಯಲಿದ್ದಾರೆ‌. ಈ ಸೈಕಲ್ ಯಾತ್ರೆಗಾಗಿಯೇ 22, 500 ರೂ ನ ಹೆಡ್ ಲೈಟ್, ಟ್ಯುಬಲೇಸ್ ಟಯರ್ ಹೊಂದಿರೋ ಸೈಕಲ್ ಖರೀದಿ‌ ಮಾಡಿದ್ದಾರೆ.‌

ಮೂರು ದಿನಗಳ‌ ಟೂರ್ ಇದಾಗಿದ್ದು, ಇದೇ 24 ರ ಹುಣ್ಣಿಮೆ ದಿನ ದೇವಾಲಯ ತಲುಪಿ ಅಂಬಾ ಭವಾನಿಗೆ ವಿಶೇಷ ಪೂಜೆ ಸಲ್ಲಿಸ್ತಾರೆ. ಪ್ರತಿವರ್ಷ ಸಚಿವರು ದೇವಸ್ಥಾನಕ್ಕೆ ಹೋಗ್ತಾರೆ. ಆದ್ರೆ, ಈ ಬಾರಿ ಸೈಕಲ್ ಏರಿ ಹೋಗ್ತಾ ಇರೋದು ಸ್ಪೆಷಲ್.‌

10 COMMENTS

LEAVE A REPLY

Please enter your comment!
Please enter your name here

Most Popular

Recent Comments